Featured Post

ಸಿಂಹಾದ್ರಿಯ ಸಿಂಹ: ಕಲ್ಲಾದರೆ ನಾನು ಚಿತ್ರ: ಸಿಂಹಾದ್ರಿಯ ಸಿಂಹ ಸಾಹಿತ್ಯ: ಎಸ್. ನಾರಾಯಣ್ ಸಂಗೀತ: ದೇವ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ ಕಲ್ಲಾದ...

Friday, 12 May 2017

ಸಿಂಹಾದ್ರಿಯ ಸಿಂಹ: ಕಲ್ಲಾದರೆ ನಾನು

ಚಿತ್ರ: ಸಿಂಹಾದ್ರಿಯ ಸಿಂಹ
ಸಾಹಿತ್ಯ: ಎಸ್. ನಾರಾಯಣ್
ಸಂಗೀತ: ದೇವ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ


ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೇರೆವೆ
ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಂಠದಿ ನಲಿವೆ
ಖಡ್ಗವಾದರೆ ನಾನು ಚೆನ್ನವನ ಕರದಲಿ ಮೆರೆವೆ
ಮರವಾದರೆ ನಾನು ಓಬವ್ವನ ಒನಕೆಯ  ಬೆರೆವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ!

ಕೃಷ್ಣ ರುಕ್ಮಿಣಿ : ಕರ್ನಾಟಕದ ಇತಿಹಾಸದಲಿ


ಚಿತ್ರ: ಕೃಷ್ಣ ರುಕ್ಮಿಣಿ 
ಸಂಗೀತ: ಕೆ  ವಿ  ಮಹದೇವನ್ 
ಸಾಹಿತ್ಯ: ಆರ್ ಎನ್ ಜಯಗೋಪಾಲ್ 
ನಿರ್ದೇಶನ: ಹೆಚ್ ಆರ್ ಭಾರ್ಗವ  
ಗಾಯಕರು: ಎಸ್ ಪಿ ಬಿ 


ಕರ್ನಾಟಕದ ಇತಿಹಾಸದಲಿ ......
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಕರ್ನಾಟಕದ ಇತಿಹಾಸದಲಿ ... 


ಜ್ಞಾನದ ಜ್ಯೋತಿಯು ವಿದ್ಯಾರಣ್ಯರು, ಅನುಗ್ರಹಗೈದ ಭೂಮಿ ಇದು,
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು, ಅನುಗ್ರಹಗೈದ ಭೂಮಿ ಇದು,
ಹಕ್ಕ ಬುಕ್ಕರು ಆಳಿದರಿಲ್ಲಿ, ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ,
ವಿಜಯದ ಕಹಳೆಯ ಊದಿದರು, ವಿಜಯನಗರ ಸ್ಥಾಪನೆ ಮಾಡಿದರು...


ಕರ್ನಾಟಕದ ಇತಿಹಾಸದಲಿ ......

ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 

ಗಂಡರಗಂಡ ಧೀರ ಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೇ ,
ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೇ ,
ಕಲಿಗಳ ನಾಡು ಕವಿಗಳ ಬೀಡು,  ಕಲಿಗಳ ನಾಡು ಕವಿಗಳ ಬೀಡು,
ಎನಿಸಿತು ಹಂಪೆಯು ಆ ದಿನದೇ.
ಕನ್ನಡ ಬಾವುಟ ಹಾರಿಸಿದಾ ,ಮದುರೆವರೆಗೂ ರಾಜ್ಯವಾ  ಹರಡಿಸಿದ, 

ಕರ್ನಾಟಕದ ಇತಿಹಾಸದಲಿ...

ಸಂಗೀತ ನಾಟ್ಯಗಳ ಸಂಗಮವಿಲ್ಲೆ,ಶಿಲ್ಪಾ  ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೆ,ಶಿಲ್ಪಾ  ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೆ, ಯತಿಗಳ ದಾಸರ ನೆಲೆನಾಡಿಲ್ಲೆ,
ಪಾವನ ಮಣ್ಣಿದು ಹಂಪೆಯದು, ಯುಗ ಯುಗ ಅಳಿಯದ ಕೀರ್ತಿ ಇದು...
ಕನ್ನಡ ಭೂಮಿ ...ಕನ್ನಡ ನುಡಿಯು .......  .ಕನ್ನಡ ಪ್ರೀತಿ.......  .ಎಂದೆಂದೂ ಬಾಳಲಿ.
ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ...

ಬೇವು ಬೆಲ್ಲ : ಜನುಮ ನೀಡುತ್ತಾಳೆ

ಚಿತ್ರ: ಬೇವು ಬೆಲ್ಲ 
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ 
ನಿರ್ದೇಶನ: ಎಸ್  ನಾರಾಯಣ್ 
ಗಾಯಕರು: ರಾಜೇಶ್ ಕೃಷ್ಣನ್ 


ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ

ಓದಿದರೂ ...... ಗೀಚಿದರೂ ..... ಒಲೆಯ ಊದಬೇಕು ..... ತಾಯಿಯಾಗಬೇಕು 
ತಾಯಿ .... ನೆಲದಾ ... ಋಣಾ ತೀರಿಸಲೇಬೇಕು 
ತಾಯಿ ಭಾಷೆ ನಿನ್ನ ಮಕ್ಕಳು ಕಲಿಬೇಕು 
ಕಾವೇರಿ......  ನೀರಲ್ಲಿ...... ಬೇಳೆ ಬೇಯಿಸಬೇಕು 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಜಾರಿದರು...... ಎಡವಿದರು...... ಕೈ ಹಿಡಿಯುತ್ತಾಳೆ...  ತಾಯಿ ಕಾಯುತ್ತಾಳೆ 
ಭೂಮಿ, ತಾಯಿ, ನೀ ಸತ್ತರು ಕರೀತಾಳೆ 
ತಾಯಿ, ಭಾಷೆ, ನೀ ಹೋದರು ಇರುತಾಳೆ 
ಸಾವಲ್ಲಿ...... ಕಾವೇರಿ...... ಬಾಯಿಗೆ ಸಿಗುತಾಳೆ 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಚಿತ್ರ: ಕನಸುಗಾರ :ಎಲ್ಲೋ ಅದು ಎಲ್ಲೋ

ಚಿತ್ರ: ಕನಸುಗಾರ 
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಕರಣ್ 
ಗಾಯಕರು: ಎಸ್ .ಪಿ. ಬಿ 


ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 
ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

ಈ ಕಂಗಳ  ಗೂಡಿನಲ್ಲಿ, ಹೊಸ ರಾಗದ ಚಿಲಿಪಿಲಿಯೂ  
ಈ ಉಸಿರಿನ ಹಾಡಿನಲ್ಲಿ, ಅನುರಾಗದ ಕಚಗುಳಿಯೊ 
ನೆನಪೇ ನನ್ನ ಮೈ ಪುಳಕ, ನೆನಪೇ ನನ್ನ ಮೈ ಜಳಕ 
ನೆನಪೇ ನನ್ನ ಧನಕನಕ ,ನೆನಪೇ ಒಂದೇ ಕೊನೆತನಕ 

ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

ನಗೆಯ ಅಲೆಯಲ್ಲಿ, ನಿನ್ನ ನಗೆಯಾ ಸವಿನೆನಪು 
ಚಿಗುರೊ ಎಲೆಯಲ್ಲಿ ,ನಿನ್ನ ಲಜ್ಜೆಯ ಸವಿನೆನಪು 
ತಿಂಗಳ ಬೆಳಕಿನ ಸುಖದಲಿ ನಿನ್ನ ಮುಖದಾ ಸವಿನೆನಪು 
ರೆಪ್ಪೆ ತೆರೆಯುವಾ ನೆನಪೇ,  ಚೈತ್ರ ಮಾಸವು
ತುಟಿಯ ತೆರೆಯುವಾ, ನೆನಪೇ ಸುಪ್ರಭಾತವು 

ಯಾರೋ ಬರೆದೂರು ನನ್ನೆದೆಯಾ ಲಾಲಿ 
ಕೇಳೂ ಕ್ಷಣವೆಲ್ಲಾ ಸವಿನೆನಪಿನ ರಂಗೋಲಿ 

ಚಲಿಸೋ ಮೂಡದಲಿ ನಿನ್ನ ತಳುಕಿನ ಸವಿನೆನಪು 
ಊಕ್ಕೂ ಕಡಲಲ್ಲಿ ನಿನ್ನ ಆಸೆಯ ಸವಿನೆನಪು 
ಗುಡಿಯಲಿ ದೇವರ ದೀಪದಲಿ, ನಿನ್ನ ಪ್ರತಿರೂಪದ ನೆನಪು 
ಚೆಲುವು ತೆರೆಯುವಾ, ನೆನಪೇ ಪ್ರೇಮದರ್ಥವು 
ಹೃದಯ ತೆರೆಯುವಾ, ನೆನಪೇ ಬಾಳಿಗರ್ಥವು 

ಎಲ್ಲೋ ಅದು ಎಲ್ಲೋ, ಕಿವಿ ತುಂಬೊ  ರಾಗ
ಕೇಳೋ ಕ್ಷಣವೆಲ್ಲಾ, ಸವಿನೆನಪಿನ ಶುಭಯೋಗ 

ಈ ಕಂಗಳ  ಗೂಡಿನಲ್ಲಿ ,ಹೊಸ ರಾಗದ ಚಿಲಿಪಿಲಿಯೂ  
ಈ ಉಸಿರಿನ ಹಾಡಿನಲ್ಲಿ, ಅನುರಾಗದ ಕಚಗುಳಿಯೊ 
ನೆನಪೇ ನನ್ನ ಮೈ ಪುಳಕ, ನೆನಪೇ ನನ್ನ ಮೈ ಜಳಕ 
ನೆನಪೇ ನನ್ನ ಧನಕನಕ ನೆನಪೇ, ಒಂದೇ ಕೊನೆತನಕ 

ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

ಆಪ್ತಮಿತ್ರ :ಕಾಲವನ್ನು ತಡೆಯೋರು

ಚಿತ್ರ: ಆಪ್ತಮಿತ್ರ 
ಸಂಗೀತ: ಗುರುಕಿರಣ್ 
ಸಾಹಿತ್ಯ: ಚಿ . ಉದಯಶಂಕರ್ 
ನಿರ್ದೇಶನ: ಪಿ . ವಾಸು 
ಗಾಯಕರು: ಹರಿಹರನ್ ,ಗುರುಕಿರಣ್ 

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ

ಊರೊಂದು ಏತಕೆ ಬೇಕು, ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೇ,ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನಾ ಹೃದಯಾ ಕಡಿಯುವ ಕಳ್ಳಾ ,ಅನ್ಯಾಯ ಒಡೆಯುವ ಕುಳ್ಳಾ
ಜೊತೆಯಾಗಿ ನಾವು ಬಂದರೆ ಒಂದಾಗಿ ನಾವು ನಿಂತರೇ
ಎದುರಲ್ಲಿ ನಿಲ್ಲೋರು ಯಾರೂ

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ

ಏನೊಂದು ಕೆಳದು ನಮಗೆ, ಬೇರೇನೂ ಬೇಡವು ನಮಗೇ
ಈ ಸ್ನೇಹ ನಮಗೆ ದೇವರು,ಇನ್ನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ, ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವಾ,ಒಂದಾಗಿ ಮುಂದೆ ಹೋಗುವಾ
ಹಾಯಾಗಿ ಜೊತೆಯಾಗಿ ನಾವು

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ

Friday, 7 April 2017

Manase O Manase - Chandramukhi Pranasakhi


ಚಿತ್ರ : ಚಂದ್ರಮುಖಿ ಪ್ರಾಣಸಖಿ
ಸಂಗೀತ ಮತ್ತು ಸಾಹಿತ್ಯ : ಕೆ ಕಲ್ಯಾಣ್
ನಟರು: ರಮೇಶ್, ಪ್ರೇಮ, ಭಾವನಾ


ಮನಸೆ ಓ ಮನಸೆ ಎಂಥ ಮನಸೆ ಮನಸೆ ಎಳೆ ಮನಸೆ
ಮನಸೆ ಓ ಮನಸೆ ಎಂಥ ಮನಸೆ ಮನಸೆ ಒಳಮನಸೆ
ಮನಸೆ ನಿನ್ನಲಿ ಯಾವ ಮನಸಿದೆ, ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೆ .......
ಮನಸು ಕೊಟ್ಟು ಮನಸನ್ನೇ ಮರೆತುಬಿಟ್ಟೆಯ
ಮನಸು ಕೊಟ್ಟು ಮನಸೊಳಗೆ ಕುಳಿತುಬಿಟ್ಟೆಯ

ಮನಸೆ ಓ ಮನಸೆ ಎಂಥ ಮನಸೆ ಮನಸೆ ಎಳೆ ಮನಸೆ

ಓ ಮನಸೆ ಒಂದು ಮನಸಲೆರಡು ಮನಸು ಎಲ್ಲ ಮನಸ ನಿಯಮ
ಓ ಮನಸೆ ಎರಡು ಹಾಲು ಮನಸಲೊಂದೇ ಮನಸು ಇದ್ದರೆ ಪ್ರೇಮ
ಮನಸಾಗೋ ಪ್ರತಿ ಮನಸಿಗೂ ಮನಸೋತಿರುವ, ಎಳೆ ಮನಸು ಎಲ್ಲ ಮನಸಿನ ಮನಸೇರೋಲ್ಲ
ಕೆಲ ಮನಸು ನಿಜ ಮನಸಿನಾಳದ ಮನಸ, ಹುಸಿ ಮನಸು ಅಂತ ಮನಸ್ಸನ್ನೆ ಮನಸೆನ್ನೋಲ್ಲ
ಮನಸೆ ಮನಸೆ ಹಸಿ ಹಸಿ ಮನಸೆ, ಮನಸು ಒಂದು ಮನಸಿರೋ ಮನಸಿನ ತನನನ
ತಿರುಗೋ ಮನಸಿಗೂ ಮರುಗೊ ಮನಸಿದೆ, ಬರದ ಮನಸಿಗೂ ಕರಗೋ ಮನಸಿದೆ
ಮೈ ಮನಸಲಿ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ
ಮುಮ್ಮಲ ಮನಸಿದ್ದರು ಮುಳುಗೇಳದು ಮನಸು
ಮನಸೆಲ್ಲೋ ಮನಸು ಮಾಡೋ ಮನಸಾ ಮನಸು    


ಓ ಮನಸೆ ಮನಸು ಮನಸಲಿದ್ದರೇನೆ ಅಲ್ಲಿ ಮನಶ್ಶಾಂತಿ
ಓ ಮನಸೆ ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಸ್ಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು, ಮನಸೂರೆ ಆಗೋದು ಮನಸಿಗೂ ಗೊತ್ತು
ಮನಸಿದ್ದರೆ ಮಾರ್ಗ ಅಂತ ಹೇಳುವ ಮನಸು, ಮನ್ನಿಸುವ ಮನಸಲ್ಲಿ ಮನಸಿಡೋ ಹೊತ್ತು
ಮನಸೇ ಮನಸೇ ಬಿಸಿ ಬಿಸಿ ಮನಸೇ, ಮನಸು ಒಂದು ಮನಸಿರೋ ಮನಸಿನ ಧಿರನನ
ತುಮುಲ ಮನಸಿಗೂ ಕೋಮಲ ಮನಸಿದೆ, ತೊದಲು ಮನಸಿಗೂ ಮೃದುಲ ಮನಸಿದೆ
ಮನಸಿಚ್ಚೆ ಮನಸ ಒಳಗೆ ಮನಸ್ವೇಚ್ಚೆ ಮನಸ ಹೊರಗೆ
ಮನಸ್ಪೂರ್ತಿ ಮನಸ ಪೂರ್ತಿ ಇರುವುದೇ ಮನಸು
ಮನಸೆಲ್ಲೋ ಮನಸು ಮಾಡೊ ಮನಸಾ ಮನಸು........

ಮನಸೆ ಓ ಮನಸೆ, ಮನಸೆ ಎಳೆ ಮನಸೆ, ಮನಸೆ ಒಳ ಮನಸೆ

-----------OOO-----------