Featured Post

ಸಿಂಹಾದ್ರಿಯ ಸಿಂಹ: ಕಲ್ಲಾದರೆ ನಾನು ಚಿತ್ರ: ಸಿಂಹಾದ್ರಿಯ ಸಿಂಹ ಸಾಹಿತ್ಯ: ಎಸ್. ನಾರಾಯಣ್ ಸಂಗೀತ: ದೇವ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ ಕಲ್ಲಾದ...

Tuesday, 14 July 2015



ಹಾಡುಬಾರಿಸು ಕನ್ನಡ ಡಿಂಡಿಮವ
ರಚನೆ: ಕುವೆಂಪು
ಗಾಯನ: ಶಿವಮೊಗ್ಗ ಸುಬ್ಬಣ್ಣ

ಬಾರಿಸು ಕನ್ನಡ ಡಿಂಡಿಮವ 
ಓ ಕರ್ನಾಟಕ ಹೃದಯ ಶಿವ 
ಬಾರಿಸು ಕನ್ನಡ ಡಿಂಡಿಮವ 

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ ||

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ ||

No comments:

Post a Comment